ಅಂದಿನ ಪ್ರಧಾನಿ ವಾಜಪೇಯಿಯವರೇ ಉಗ್ರ ಮಸೂದ ಹಝಾರ್ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದ. ಆ ಉಗ್ರನೇ ಇಂದು ನಮ್ಮ ಯೋಧರನ್ನು ಕೊಂದ. ವಾಜಪೇಯಿಗೆ ಧಿಕ್ಕಾರ ಎನ್ನುವುದು ಅಜ್ಞಾನಿಗಳ ಇವತ್ತಿನ ಮೊಂಡು ವಾದ.
ಆದರೆ ಅಂದು ಸಂಭವಿಸಿದ್ದೇನು?
ಅಂದು ಡಿಸೆಂಬರ್ 24, 1999 ರಂದು ಇಂಡಿಯನ್ ಏರ್ಲೈನ್ಸ್ ವಿಮಾನ IC814, ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸುತ್ತಿತ್ತು. 176 ಪ್ರಯಾಣಿಕರಿದ್ದ ಈ ವಿಮಾನವನ್ನು ಪಾಕ್ ಉಗ್ರಗಾಮಿ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್ ಉಗ್ರರು ಅಪಹರಣ ಮಾಡಿದ್ದರು.
ದೆಹಲಿಗೆ ಆಗಮಿಸಬೇಕಾಗಿದ್ದ ವಿಮಾನನವನ್ನು ಉಗ್ರರು ಅಫ್ಘಾನಿಸ್ಥಾನ ಕಂದಹಾರ್ ಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಉಗ್ರರು ತಮ್ಮ ಬಿಗಿ ಹಿಡಿತದಲ್ಲಿರಿಸಿಕೊಂಡಿದ್ದರು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಇದು ಬಹುದೊಡ್ಡ ಸಂಕಷ್ಟವನ್ನೇ ತಂದಿತ್ತು.
ಉಗ್ರ ಮೌಲಾನಾ ಮಸೂದ್ ಅಝರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕೆಂದು ವಿಮಾನ ಅಪಹರಿಸಿದ್ದ ಉಗ್ರರು ಬೇಡಿಕೆ ಇಟ್ಟಿದ್ದರು.
ಏಳು ದಿನಗಳ ಕಾಲ ಉಗ್ರರ ಒತ್ತೆಯಾಳಾಗಿದ್ದ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಾಜಪೇಯಿ ಸರ್ಕಾರ ಜೀವಂತವಾಗಿ ಕರೆತರಲು ಭಾರತದಲ್ಲಿ ಜೈಲಿನಲ್ಲಿದ್ದ ಮೂವರು ಕುಖ್ಯಾತ ಭಯೋತ್ಪಾದಕರನ್ನು ಬಿಡುಗಡೆ ಮಾಡಿತ್ತು.
ಅಂದು ವಿದೇಶಾಂಗ ಸಚಿವ ಆಗಿದ್ದ ಜಸ್ವಂತ್ ಸಿಂಗ್ ವಾಜಪೇಯಿ ಅಣತಿಯಂತೆ ಉಗ್ರರೊಡನೆ ಮಾತುಕತೆಗೆ ಮುಂದಾಗಿದ್ದರು. ಅವರು ಭಯೋತ್ಪಾದಕರಾದ ಮಸೂದ್ ಅಝರ್, ಒಮರ್ ಸಯೀದ್ ಶೇಖ್ ಮತ್ತು ಮುಷ್ಠಕ್ ಅಹ್ಮದ್ ಝಾರ್ಗರ್ ಅವರನ್ನು ಕಂದಹಾರ್ ಗೆ ಕರೆದೊಯ್ದರು.ಅಲ್ಲಿ ಅಂತಿಮ ಮಾತುಕತೆ ನಡೆಯಿತು.
ಆ ಸಮಯದಲ್ಲಿ ಪ್ರಧಾನಿ ವಾಜಪೇಯಿ ನಡೆಯನ್ನು ವಿಪಕ್ಷಗಳು, ರಾಷ್ಟ್ರೀಯ ವಿಶ್ಲೇಷಕರಿಂದ ಟೀಕೆಗೆ ಒಳಗಾಗಿತ್ತು. ಭಾರತೀಯ ವಿರೋಧಿ ನಿಲುವು ತಾಳಿದರೆಂದು ವಾಜಪೇಯಿ ಬೇಷರತ್ ಕ್ಷಮೆ ಕೇಳಬೇಕೆಂದು ಅಂದು ಕಾಂಗ್ರೆಸ್ ಸಹ ಆಗ್ರಹಿಸಿತ್ತು.
ಆದರೆ ವಾಜಪೇಯಿಯವರಿಗೆ ವಿಮಾನದಲ್ಲಿರುವ ಪ್ರಯಾಣಿಕರು, ಸಿಬ್ಬಂದಿಗಳ ಜೀವ ರಕ್ಷಣೆಯೇ ಮುಖ್ಯವಾಗಿತ್ತು. ವಿಮಾನ ಪ್ರಯಾಣಿಕರ ಸುರಕ್ಷತೆಯೇ ದೇಶದ ಆದ್ಯತೆ ಎಂದು ಬಗೆದ ವಾಜಪೇಯಿ ಉಗ್ರರ ಬಿಡುಗಡೆ ಮಾಡಿ ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಇನ್ನೊಂದು ಪ್ರಕಾರ, ಅಂದಿನ ಮಾಧ್ಯಮಗಳು, ವಿರೋಧಪಕ್ಷಗಳು, ಬುದ್ಧಿಜೀವಿಗಳ ತಂಡ, ಅಪಹರಣಕಾರರನ್ನು ಸುರಕ್ಷಿತವಾಗಿ ಕರೆತರುವಂತೆ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇನ್ನೊಂದು ಕಡೆ ಅಪಹರಣವಾದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು ಇಂತಹಾ ಕಠಿಣ ಸಮಯದಲ್ಲಿ ಪ್ರಧಾನಿಯಾಗಿ ವಾಜಪೇಯಿ ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು. ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಆದರೆ ಇಂದು ಪರಿಜ್ಞಾನವಿಲ್ಲದೆ ಬೊಗಳುತ್ತಿರುವ ಜನಕ್ಕೆ ಏನು ಹೇಳೋಣ? ರಾಜಕೀಯ ಇರಬೇಕು. ಆದರೆ ರಾಜಕೀಯಕ್ಕಾಗಿ ದೇಶದ ಭದ್ರತೆ, ಘನತೆ, ಸಾರ್ವಭೌಮತ್ವವನ್ನೇ ಮಣ್ಣುಮಾಡುವಂತಹ ಹೇಳಿಕೆ ನೀಡುವುದು ದೇಶದ್ರೋಹದ ಕೆಲಸ. ಇಂಥವರನ್ನು ಮುಲಾಜಿಲ್ಲದೇ ಒದ್ದು ಒಳಗೆ ಹಾಕಬೇಕು.